ಸಂವಿಧಾನದ ಪ್ರಕಾರ ಆಡಳಿತ ನಡೆಸಬೇಕಿದ್ದ ಸರ್ಕಾರಗಳ ವೈಫಲ್ಯದ ಹಿನ್ನೆಲೆಯಲ್ಲಿ, ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡಿರುವ ಹೋರಾಟಗಾರರು ಉನ್ನತ ಮಟ್ಟದಲ್ಲಿ ಚಳುವಳಿಗಳನ್ನು ಮುಂದುವರೆಸಿದ್ದಾರೆ. ಸರ್ಕಾರಗಳು ಚಳುವಳಿಯ ದಮನವನ್ನು ಮಾತ್ರವೇ ಕಂಡಿವೆ, ಆದರೆ ಇನ್ನೂ ಚಳುವಳಿಯ ಬೇರುಗಳನ್ನು ನೋಡುತ್ತಿಲ್ಲ. ಯಾರು ಅಧಿಕಾರಕ್ಕೆ ಬಂದರೂ, ಶಾಸಕಾಂಗಗಳಲ್ಲಿ ಸಂಖ್ಯಾಬಲ ಯಾವ ದಿಕ್ಕಿನಲ್ಲಿದ್ದರೂ, ಯಾವುದೇ ಕಾನೂನುಗಳನ್ನು ರೂಪಿಸಿದರೂ, ಅವರು ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವ ತತ್ವಗಳಿಗೆ ಬದ್ಧರಾಗಿರಬೇಕು. ಇತಿಹಾಸದುದ್ದಕ್ಕೂ, ಬುಡಕಟ್ಟು ಜನಾಂಗದವರು ತಲೆಮಾರುಗಳಿಂದ ಹೋರಾಡಿ ಅನೇಕ ಕಾನೂನುಗಳನ್ನು ಸಾಧಿಸಿದ್ದಾರೆ. ಅವುಗಳ ಅನುಷ್ಠಾನಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿಯಿಂದ, ಬಲಿಷ್ಠವಾದ ಬುಡಕಟ್ಟು ಹೋರಾಟಗಳು ಮಧ್ಯ ಭಾರತದಲ್ಲಿ ಮುಂದುವರೆದಿವೆ. ಅವುಗಳನ್ನು ದಮನಿಸಲು ಮಾವೋವಾದಿ ಪಕ್ಷವನ್ನು ನೆಪವಾಗಿ ಬಳಸುತ್ತಿದೆ, ಮಧ್ಯ ಭಾರತವನ್ನು ಯುದ್ಧ ಭೂಮಿಯಾಗಿ ಪರಿವರ್ತಿಸಲಾಗುತ್ತಿದೆ. ಬಸ್ತಾರ್ ಸಶಸ್ತ್ರ ಪಡೆಗಳಿಂದ ತುಂಬಿದೆ.
ದೇಶದಲ್ಲಿ, ಪ್ರಪಂಚದಲ್ಲಿ ಎಲ್ಲಿಯಾದರೂ ಆದಿವಾಸಿಗಳು ವಾಸಿಸುವ ಹಕ್ಕು ಸಂಪೂರ್ಣವಾಗಿ ಅಪಾಯದಲ್ಲಿದೆ. ತಲೆಮಾರುಗಳಿಂದ ದಟ್ಟವಾದ ಕಾಡುಗಳು, ಬೆಟ್ಟಗಳು ಮತ್ತು ಪ್ರಾಣಿಗಳೊಂದಿಗೆ ಕಳೆಯುವ ಮೂಲನಿವಾಸಿಗಳ ಸಾಂಸ್ಕೃತಿಕ ಪರಂಪರೆ ನಾಶವಾಗುತ್ತಿದೆ. ಅವರ ಸ್ವ-ಆಡಳಿತ ಮತ್ತು ಸ್ವ-ನಿರ್ಣಯಾಧಿಕಾರದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಮಾತ್ರವಲ್ಲದೆ ಸಾಮ್ರಾಜ್ಯಶಾಹಿಯ ಸೋಗಿನಲ್ಲಿ ನಡೆಸಲಾಗುತ್ತಿರುವ ವಿನಾಶಕಾರಿ ಅಭಿವೃದ್ಧಿಯಿಂದಾಗಿ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಬುಡಕಟ್ಟು ಜನಾಂಗದವರ ಬದುಕುವ ಹಕ್ಕನ್ನು ನಿರಂತರವಾಗಿ ಬೇಟೆಯಾಡಲಾಗುತ್ತಿದೆ. ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕಾಗಿರುವ ಬದುಕುವ ಹಕ್ಕನ್ನು ಸಹ ಆಪರೇಷನ್ ಕಾಗರ್ ಮೂಲಕ ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ.
ಸರ್ಕಾರ ಖನಿಜ ಸಂಪತ್ತನ್ನು ಕಾರ್ಪೊರೇಟ್ಗಳಿಗೆ ಹಸ್ತಾಂತರಿಸುವ ಸಲುವಾಗಿ ಆಪರೇಷನ್ ಕಗಾರ್ ಅನ್ನು ಪ್ರಾರಂಭಿಸುವ ಮೂಲಕ ಬುಡಕಟ್ಟು ಜನಾಂಗದವರ ನರಮೇಧವನ್ನು ಮುಂದುವರಿಸುತ್ತಿದೆ. ಕಾರ್ಪೊರೇಟ್ ಬಂಡವಾಳಶಾಹಿಗಳ ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿ ಎಂದು ಎಂದಿಗೂ ಪರಿಗಣಿಸಲಾಗುವುದಿಲ್ಲ. ಸರ್ಕಾರಗಳು ಅಭಿವೃದ್ಧಿ ಆಗಬೇಕಾದರೆ ಜನರು ಕೆಲವು ಕಷ್ಟಗಳನ್ನು ಎದುರಿಸಲೇಬೇಕು ಎಂದು ಹೇಳುತ್ತಿವೆ. ಆದರೆ ವಾಸ್ತವದಲ್ಲಿ ಇವೆಲ್ಲವೂ ಜನವಿರೋಧಿ ಕ್ರಮಗಳಾಗಿವೆ. ಇವು ಮುಖ್ಯವಾಗಿ ಬುಡಕಟ್ಟು ಜನಾಂಗದವರ ಜೀವನವನ್ನು ನಾಶಮಾಡುವ ಕೃತ್ಯಗಳಾಗಿವೆ ಎಂಬುದನ್ನು ಗಮನಿಸಬೇಕಿದೆ. ದಂಡಕಾರಣ ಅರಣ್ಯದಲ್ಲಿ 70 ಲಕ್ಷ ಕೋಟಿ ರೂ. ಮೌಲ್ಯದ ಖನಿಜ ಸಂಪತ್ತು ಇರುವುದು ಬುಡಕಟ್ಟು ಜನಾಂಗದವರ ಅಪರಾಧವಲ್ಲ ಅಲ್ಲವೇ, ಆದರೆ ಅದನ್ನು ಹೊರ ತೆಗೆಯಲು, ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಮೂಲಕ ಪರ್ಯಾಯ ನೀತಿಗಳನ್ನು ಆದಿವಾಸಿಗಳಿಗೆ ಒದಗಿಸುತ್ತಾ ಆ ದಿಕ್ಕಿನಲ್ಲಿ ಸರ್ಕಾರ ಕ್ರಮಗಳಿರಬೇಕಿದೆ.
ಮಧ್ಯ ಭಾರತದಲ್ಲಿ, ನಕ್ಸಲ್ಬರಿ, ತೆಬಗಾ ಮತ್ತು ವೈಲಾರ್ನ ಸಶಸ್ತ್ರ ರೈತ ಹೋರಾಟಗಳು ಮತ್ತು ಶ್ರೀಕಾಕುಳಂ ಮತ್ತು ಆದಿವಾಸಿಗಳ ಬುಡಕಟ್ಟು ಜನಾಂಗದ ಸಶಸ್ತ್ರ ಮತ್ತು ಪ್ರತಿರೋಧ ಹೋರಾಟಗಳು ಆಗಿರಬಹುದು, ಆಳುವವರ್ಗಗಳು ಆದಿವಾಸಿಗಳ ಕಡೆಗೆ ಗಮನ ಹರಿಸಲು ಮತ್ತು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಕಾರಣವಾಗಿರಬಹುದು. ಆದಿವಾಸಿಗಳ ಹಕ್ಕುಗಳು ಮತ್ತು ಅವರ ಕಲ್ಯಾಣಕ್ಕಾಗಿ ಹೋರಾಡುತ್ತಿದ್ದಾರೆ. ಅದರ ಭಾಗವಾಗಿ, ಮಧ್ಯ ಭಾರತದಲ್ಲಿ ಮಾವೋವಾದಿ ಬುಡಕಟ್ಟು ಹೋರಾಟಗಳು ಬಲವಾಗಿ ಮುಂದುವರೆದಿವೆ. ಕಳೆದ ಮೂರುವರೆ ದಶಕಗಳಿಂದ, ಸರ್ಕಾರಗಳು ಮಧ್ಯ ಭಾರತವನ್ನು ಯುದ್ಧಭೂಮಿಯನ್ನಾಗಿ ಪರಿವರ್ತಿಸಿವೆ. ಹಲವಾರು ಕಂಟೈನ್ಮೆಂಟ್ ಕಾರ್ಯಾಚರಣೆಗಳ ನಂತರ, ಕಳೆದ, 2024 ರಿಂದ, ಮೋದಿ ಮತ್ತು ಅಮಿತ್ ಶಾ ಸರ್ಕಾರಗಳು ಆಪರೇಷನ್ ಕಾಗರ್ ಹೆಸರಿನಲ್ಲಿ ಕ್ರೂರ ಹತ್ಯಾಕಾಂಡವನ್ನು ಮುಂದುವರಿಸುತ್ತಿವೆ. ತುರ್ತು ಪರಿಸ್ಥಿತಿಗೆ ಮುನ್ನ ಮತ್ತು ನಂತರ ದೇಶದಲ್ಲಿ ರೂಪುಗೊಂಡ ಎಲ್ಲಾ ಹಕ್ಕು ಸಂಘಟನೆಗಳು ಇಲ್ಲಿಯವರೆಗೆ ಪ್ರತಿಯೊಂದು ಎನ್ಕೌಂಟರ್ ಘಟನೆಯ ಬಗ್ಗೆ ಸತ್ಯಶೋಧನಾ ತಂಡವನ್ನು ಸ್ಥಾಪಿಸಿವೆ ಮತ್ತು ಜನರಿಗೆ ಸತ್ಯವನ್ನು ಬಹಿರಂಗಪಡಿಸಲು ಸತ್ಯದ ಹುಡುಕಾಟದಲ್ಲಿ ಅನೇಕ ಜೀವಗಳನ್ನು ತ್ಯಾಗ ಮಾಡಿವೆ. ಆಪರೇಷನ್ ಕಾಗರ್ ನ ವಿಶಿಷ್ಟತೆಯೆಂದರೆ, ಯಾವುದೇ ಮಾನವ ಹಕ್ಕುಗಳ ಸಂಘಟನೆಗೆ ಬಸ್ತಾರ್ ಗೆ ಭೇಟಿ ನೀಡಲು ಅವಕಾಶ ನೀಡದೇ, ಸತ್ಯವನ್ನು ಬಹಿರಂಗಗೊಳಿಸದೇ, ಹತ್ಯಾಕಾಂಡ ಮುಂದುವರೆಯುತ್ತಿರುವ ಸ್ಥಿತಿ ಇದೆ. ಇದುವರೆಗೆ, 70 ಎನ್ಕೌಂಟರ್ ಗಳಲ್ಲಿ 600 ಕ್ಕೂ ಹೆಚ್ಚು ಮಾವೋವಾದಿಗಳು ಮತ್ತು ಬುಡಕಟ್ಟು ಜನಾಂಗದವರನ್ನು ಅತ್ಯಂತ ಕ್ರೂರವಾಗಿ ಕೊಲ್ಲುವುದನ್ನು ಮುಂದುವರೆಸಿದ್ದಾರೆ. ಆದರೆ ಛತ್ತೀಸ್ಗಢದಲ್ಲಿ ಯಾವುದೇ ಮಾನವ ಹಕ್ಕುಗಳ ಸಂಘಟನೆಗಳು ಒಂದೇ ಒಂದು ಎನ್ಕೌಂಟರ್ ಹತ್ಯೆಯ ಬಗ್ಗೆ ಸತ್ಯಶೋಧನಾ ತನಿಖೆ ನಡೆಸಲು ಸಾಧ್ಯವಾಗಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ಸಂಘಟನೆಗಳ ಸ್ಥಿತಿಯಾಗಿದೆ.
ಆದಿವಾಸಿಗಳು ಹೋರಾಡಿ ಸಾಧಿಸಿದ ೧೯೯೬ರ ಪೆಸಾ ಕಾಯ್ದೆ, ೨೦೦೬ರ ಅರಣ್ಯ ಹಕ್ಕು ಕಾಯ್ದೆ ಮತ್ತು ೫ ಮತ್ತು ೬ನೇ ಶಡ್ಯೂಲ್ ಜಾರಿಗೆ ತರಬೇಕಾದ ಸರ್ಕಾರಗಳು ಅವುಗಳನ್ನು ಪ್ರಜಾಸತ್ತಾತ್ಮಕವಾಗಿ ಜಾರಿಗೆ ತರಬೇಕಾಗಿದೆ. ಬಿರ್ಸಾ ಮುಂಡಾ ಕಾಲದಿಂದಲೂ ಬುಡಕಟ್ಟು ಜನರು ಹೋರಾಡಿ ಪಡೆದಿರುವ ಎಲ್ಲಾ ಬುಡಕಟ್ಟು ಹಕ್ಕುಗಳನ್ನು ತಿದ್ದುಪಡಿಗಳ ಹೆಸರಿನಲ್ಲಿ ದುರ್ಬಲಗೊಳಿಸಲಾಗುತ್ತಿದೆ ಮತ್ತು ಅವುಗಳಲ್ಲಿ ಕೆಲವನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗದಂತೆ ಮಾಡಲಾಗುತ್ತಿದೆ. ಅವುಗಳ ಅನುಷ್ಠಾನಕ್ಕಾಗಿ ಹೋರಾಡಿದರೆ, ನಕ್ಸಲೀಯರೆಂದು ಬಂಧಿಸುತ್ತಾರೆ, ಗುಂಡು ಹಾರಿಸಿ ಕೊಂದು ಎನ್ಕೌಂಟರ್ಗಳೆಂದು ಘೋಷಿಸುತ್ತಾರೆ. ಈಗಾಗಲೇ 8 ಸಾವಿರ ಜನರನ್ನು ಎನ್ಕೌಂಟರ್ಗಳ ಹೆಸರಿನಲ್ಲಿ ಕೊಲ್ಲಲಾಗಿದೆ. ಯಾವುದೇ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲಾಗಿಲ್ಲ. ಚಳುವಳಿ ನಡೆಯುತ್ತಿರುವ ರಾಜ್ಯಗಳಲ್ಲಿ ಪೊಲೀಸರೇ ರಾಜಕೀಯ ನಾಯಕರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇಂದಿಗೂ ನಡೆಯುತ್ತಿರುವ ಕಾಗರ್ ಯುದ್ಧ ಇನ್ನೂ ನಿಲ್ಲುತ್ತಿಲ್ಲ. ಆಳುವವರ್ಗದ ಯುದ್ಧ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದೆಡೆ, ಮಾವೋವಾದಿ ಪಕ್ಷವು 5 ತಿಂಗಳಿನಿಂದ 10 ಹೇಳಿಕೆಗಳೊಂದಿಗೆ ಶಾಂತಿ ಮಾತುಕತೆಗಾಗಿ ಅಖಿಲ ಭಾರತ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಬುದ್ಧಿಜೀವಿಗಳೊಂದಿಗೆ ಶಾಂತಿ ಸಮಿತಿಗಳನ್ನು ರಚಿಸಲು ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಮಾತ್ರ ಕೊಲ್ಲುತ್ತೇವೆ, ನಿರ್ಮೂಲಿಸುತ್ತೇವೆ ಎಂದು ಮಾತನಾಡುತ್ತಿದ್ದಾರೆಯೇ ಹೊರತು ಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿಲ್ಲ. ಯಾವಾಗಲೂ ಚಳುವಳಿಗಳು ಎಷ್ಟೇ ಪ್ರಬಲವಾಗಿದ್ದರೂ, ಅವುಗಳಿಗೆ ಸಾಮಾಜಿಕ, ರಾಜಕೀಯ ಮತ್ತು ನ್ಯಾಯದ ಅಂಶಗಳು ಇಲ್ಲದಿದ್ದರೆ, ಅವು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಹೀಗೆ ಸಾಮಾಜಿಕ, ರಾಜಕೀಯ, ನ್ಯಾಯಕ್ಕಾಗಿ ಸಾಗುತ್ತಿರುವ ಈ ಚಳುವಳಿಯನ್ನು ಕಾರ್ಪೊರೇಟ್ಗಳ ಹಿತಾಸಕ್ತಿಗಾಗಿ ನಿರ್ಮೂಲನೆ ಮಾಡಲು ಮೋದಿ-ಅಮಿತ್ ಪ್ರಭುತ್ವ ಅಪ್ರಜಾತಾಂತ್ರಿಕ ಸರ್ವಾಧಿಕಾರದ ವಿಧಾನದ ಮೂಲಕ ಪ್ರಯತ್ನಿಸುತ್ತಲೇ ಇದೆ. ಶಾಂತಿ ಮಾತಿಕತೆ ನಡೆಸಬೇಕೆಂದು ಬಹುಪಾಲು ಜನರು, ಎಲ್ಲಾ ವಿರೋಧ ಪಕ್ಷಗಳು ಮತ್ತು ಎಡ ಪಕ್ಷಗಳು ಬೇಡಿಕೆಗಳಿಟ್ಟು ಮನವಿ ಮಾಡಿದಾಗಲೂ, ಸರ್ಕಾರ ಹತ್ಯೆಗಳಿಗೆ ಆದ್ಯತೆ ನೀಡುತ್ತಿದೆ. ಶಾಂತಿ ಮಾತುಕತೆಗಳ ಮೂಲಕ ಕದನ ವಿರಾಮ ಘೋಷಿಸಿ ಜನರ ಮುಂದೆ ತನ್ನ ಪ್ರಜಾಸತ್ತಾತ್ಮಕ ಆಚರಣೆಗಳನ್ನು ತೋರಬೇಕಾದ ಅಗತ್ಯವಿದೆ.
ಸಂವಿಧಾನದ ಐದನೇ ಮತ್ತು ಆರನೇ ಶೆಡ್ಯೂಲ್ಗಳ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ, ಬುಡಕಟ್ಟು ಜನಾಂಗದವರ ಸ್ಥಿತಿಗತಿಗಳು ಮತ್ತು ಆಯಾ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಅಂಶಗಳು ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು. ಆದರೆ ಸರ್ಕಾರಿ ಯಂತ್ರದ ಕಾರ್ಯವೈಖರಿ ದಾರಿ ತಪ್ಪಿದೆ. ಷಡ್ಯೂಲ್ಡ್ ಪ್ರದೇಶಗಳಲ್ಲಿ ಆದಿವಾಸಿಗಳ ಪರಿಸ್ಥಿತಿಯನ್ನು ಪರಿಶೀಲಿಸುವ ಮತ್ತು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಇದೆ. ಆದರೆ ಎಲ್ಲಾ ಆಡಳಿತ ವ್ಯವಸ್ಥೆಗಳನ್ನು ಮೋದಿ ಸರ್ಕಾರ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಆದಿವಾಸಿಗಳ ಮೇಲೆ ಕಗಾರ್ ಹತ್ಯಾಕಾಂಡಕ್ಕೆ ವಿರುದ್ಧ ಶಾಂತಿ ಚರ್ಚೆಗಳನ್ನು ನಡೆಸಿ ಕದನ ವಿರಾಮ ಘೋಷಿಸಬೇಕೆಂದು ಅಖಿಲ ಭಾರತ ಮಟ್ಟದಲ್ಲಿ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರ “ನಾವು ಚಳುವಳಿಯನ್ನು ನಿರ್ಮೂಲನೆ ಮಾಡುತ್ತೇವೆ” ಎಂಬ ಭಾಷೆಯನ್ನು ಹೊರತುಪಡಿಸಿ ಬೇರೆ ಪ್ರಜಾಪ್ರಭುತ್ವ ಭಾಷೆಯನ್ನು ಮಾತನಾಡಲು ಮುಂದೆ ಬರುತ್ತಿಲ್ಲ. ಅವರ ಸಂಪೂರ್ಣ ಅಭ್ಯಾಸವೆಂದರೆ ಸರ್ವಾಧಿಕಾರಿ, ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿ ಪ್ರವೃತ್ತಿಗಳೊಂದಿಗೆ ಪ್ರಜಾಪ್ರಭುತ್ವ ಮೌಲ್ಯಗಳು, ಬುಡಕಟ್ಟು ಕಾನೂನುಗಳು ಮತ್ತು ದಲಿತರ ಸ್ವಾಭಿಮಾನದ ಸಮಸ್ಯೆಗಳನ್ನು ನಿಗ್ರಹಿಸಲು ಸರ್ಕಾರಗಳು ಸಿದ್ಧತೆ ನಡೆಸುತ್ತಿವೆ. ಆದರೆ ಶಾಂತಿ ಮಾತುಕತೆಯ ಮೂಲಕ ಪ್ರಜಾಸತ್ತಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಪ್ರಜಾಪ್ರಭುತ್ವದ ಕರ್ತವ್ಯವೆಂದು ಪರಿಗಣಿಸುವಲ್ಲಿ ವಿಫಲವಾಗಿವೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಶಾಂತಿ ಚರ್ಚೆಗಳು ಕದನ ವಿರಾಮವನ್ನು ಘೋಷಿಸುವುದಕ್ಕಾಗಿ. ಒಂದು ಆಂದೋಲನವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.


Leave a reply